Anathasevashrama Trust (R)
Malladihalli - 577531
Holalkere Tq, Chitradurga Dist, Karnataka
Ph : 08191-289242 / 289529 / 9902276970
Email ID: principalccpemdh@gmail.com
Date : 14-12-2015
ಮಲ್ಲಾಡಿಹಳ್ಳಿ : ಇಲ್ಲಿಯ ಅನಾಥಸೇವಾಶ್ರಮ ವಿಶ್ವಸ್ತ ಸಮಿತಿಯ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಸತೀಶ್ .ಆರ್.ಹಾರೋಮಠ್ ಮತ್ತು ಡಿ.ಕೆ.ಶಿವಶಂಕರ್ ಇವರುಗಳು ಚಿತ್ರದುರ್ಗ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಸಂಸ್ಕøತ ಭಾಷಣ ಮತ್ತು ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳ ಈ ಸಾಧನೆಗೆ ಕಾರಣರಾದ ಅಧ್ಯಾಪಕ ವೃಂದವನ್ನು ಅನಾಥಸೇವಾಶ್ರಮದ ಆಡಳಿತ ಮಂಡಳಿ ಅಭಿನಂದಿಸಿದೆ ಎಂದು ಎನ್.ಸಿ.ಸಿ ಅಧಿಕಾರಿ ಹಾಗೂ ಉಪಪ್ರಾಚಾರ್ಯ ಆರ್.ಬಿ.ಹಾರೋಮಠ್ ತಿಳಿಸಿದ್ದಾರೆ.
Date : 14-12-2015
ಮಲ್ಲಾಡಿಹಳ್ಳಿ : ಶಿಕ್ಷಣ ಒಂದು ಬದುಕು ಅದು ಪದವಿಯಲ್ಲ ಶಿಕ್ಷಣದ ಮೂಲಕ ಪದವಿಯನ್ನು ಪಡೆದು ಕೊಳ್ಳಬಹುದಾಗಿದ್ದು ನಾವು ಪಡೆಯುವ ಶಿಕ್ಷಣ ನಮ್ಮ ಬದುಕನ್ನು ಕಟ್ಟಿಕೊಡುತ್ತದೆ ಎಂದು ಚಿತ್ರದುರ್ಗ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಬಿ.ಇಡಿ ಕಾಲೇಜಿನಲ್ಲಿ ಸಮಾರೋಪ ಭಾಷಣ ಮಾಡುತ್ತಾ ಎದೆಗೆ ಬಿದ್ದ ಅಕ್ಷರ ಮತ್ತು ನೆಲಕ್ಕೆ ಬಿದ್ದ ಬೀಜ ಹೇಗೆ ಫಲವನ್ನು ಕೊಡುತ್ತವೆಯೋ ಹಾಗೆ ನಾವು ಕಲಿತ ಶಿಕ್ಷಣ ಫಲಪ್ರದವಾಗಿರಬೇಕು ಎಂದರು. ನಾಳೆಯ ಕುರಿತು ಆತಂಕ ಮತ್ತು ಹತಾಶೆಯಲ್ಲಿ […]
Date : 28-11-2014
ಮಲ್ಲಾಡಿಹಳ್ಳಿ : ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯ ಮಹತ್ವದ ಅರಿವು ಅವಶ್ಯ ಎಂದು ಸೇವಾದಳದ ಅಧಿಕಾರಿ ಎಚ್.ಸ್ವಾಮಿ ನುಡಿದರು. ಅವರು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜು ಹಾಗೂ ಸೇವಾದಳ-ದಾವಣಗೆರೆ ಶಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯ ಅರಿವಿನ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಇಂದು ಸಮಾಜದಲ್ಲಿ ರಾಷ್ಟ್ರಧ್ವಜದ ಮಹತ್ವ ಅರಿಯದೆ ಬೇಕಾಬಿಟ್ಟಿಯಾಗಿ ಧ್ವಜವನ್ನು ಆರೋಹಣ ಮತ್ತು ಅವರೋಹಣ ಮಾಡುತ್ತಿರುವುದು ವಿಷಾದನೀಯ, ಯಾವುದೇ ದೇಶದ ಪ್ರಜೆ ಆ ದೇಶದ ರಾಷ್ಟ್ರಗೀತೆ, […]